ಸಂಯೋಜಕ: ಪುರಾಂದರ ದಾಸರು
ಗಾಯಕರು: ವಿವಿಧ
ಪ್ರಕಾರ: ಭಕ್ತಿ
ಭಗವಾನ್: ಕೃಷ್ಣ
ಭಾಷೆ: ಕನ್ನಡ
”ಪುರಂದರದಸರ ಪದಗಲು” ಎಂಬ ಪುಸ್ತಕದಲ್ಲಿನ ಸಾಹಿತ್ಯ
ತಾಳ: ಆದಿ ತಾಳ

Thoogire Rangana Thoogire Krishnana / ತೂಗಿರೆ ರಂಗನ ತೂಗಿರೆ ಕೃಷ್ಣನ-Lyrics in Kannada

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ ||

ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ ||

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ ||

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ
ನಾಗ ಕನ್ನಿಕೆಯರು ತೂಗಿರೆ
ನಾಗವೇಣಿಯರು ನೇಣ ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ || ೧ ||

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ ||

ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ
ಇಂದುಮುಖಿಯರೆಲ್ಲ ತೂಗಿರೆ
ಇಂದ್ರ ಕನ್ನಿಕೆಯರು ಚಂದದಿ ಬಂದು
ಮುಕುಂದನ ತೊಟ್ಟಿಲ ತೂಗಿರೆ || ೨ ||

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ ||

ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ
ನೀಲಕುಂತಳೆಯರು ತೂಗಿರೆ
ವ್ಯಾಳಶಯನ ಹರಿ ಮಲಗು ಮಲಗೆಂದು
ಬಾಲ ಕೃಷ್ಣಯ್ಯನ ತೂಗಿರೆ || ೩ ||

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ ||

ಸಾಸಿರ ನಾಮನೆ ಸರ್ವೋತ್ತಮನೆಂದು
ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮಡುವಿನೊಳ್ ಶೇಷನ ತುಳಿದಿಟ್ಟ
ದೋಷ ವಿದೂರನ ತೂಗಿರೆ || ೪ ||

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ ||

ಅರಳೆಲೆ ಮಾಗಾಯಿ ಕೊರಳ ಮುತ್ತಿನ ಹಾರ
ತರಳನ ತೊಟ್ಟಿಲ ತೂಗಿರೆ
ಸಿರಿದೇವಿ ರಮಣನೆ ಪುರಂದರ ವಿಠಲನೆ
ಕರುಣದಿ ಮಲಗೆಂದು ತೂಗಿರೆ || ೫ ||

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ |

ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ |
ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ ||

Thoogire Rangana Thoogire Krishnana / ತೂಗಿರೆ ರಂಗನ ತೂಗಿರೆ ಕೃಷ್ಣನ- Kannada Bhavageethe- Lyrics in Kannada

Thoogire Rangana Thoogire Krishnana is a well-known composition of the great Haridasa Shri Purandara Dasaru’s. Over the years, many artists have performed Thoogire Rangana Thoogire Krishnana, including the very famous Dr. Vidyabhushana and others.

Shri Purandara Dasaru is one of the greatest Krishna devotees.  Lord Krishna is revered as the deity of love, tenderness, and mercy. Lord Krishna’s birthday is celebrated as Krishna Janmashtami.

ಧೂಪ್ ಆರತಿ (ಸಂಜೆ ಆರತಿ) ಕನ್ನಡ ಸಾಹಿತ್ಯ : ಶಿರಡಿ ಸಾಯಿಬಾಬಾ ಸ್ತೋತ್ರಮ್

ಲಿಂಗಾಷ್ಟಕಂ ಸೋತ್ರಮ್ ಸಾಹಿತ್ಯ / LINGASHTAKAM STOTRAM LYRICS

ವಂದಿಸುವುದಾದಿಯಲಿ ಗಣನಾಥನ / Vandisuvudadiyali Gananathana – ಪುರಂದರ ದಾಸರ ಕೀರ್ತನೆಗಳು

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ / Innastu Bekenna Hrudayakke Rama

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು