ಸಾಹಿತ್ಯ: ಶ್ರೀ ಗಜನಾನ ಶರ್ಮಾ
ಪ್ರಕಾರ: ಭಕ್ತಿ
ಭಗವಾನ್: ರಾಮ
ಭಾಷೆ: ಕನ್ನಡ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ
ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|
ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|
ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|
ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|
ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ|
ವೈದೇಹಿಯಾಗುವೆನು ಒಡನಾಡು ರಾಮ|
ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ|
ಸಹವಾಸ ಕೊಡು ನಾನು ಸೌಮಿತ್ರಿ ರಾಮ|
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
ನಾ ವಿಭೀಷಣ ಶರಣುಭಾವ ಕೊಡು ರಾಮ|
ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ|
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
ಪೂರ್ಣ ನೀ ಪ್ರಕಟ ನೀ ಆನಂದ ರಾಮ|
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
ರಘುರಾಮ ರಘುರಾಮ ರಘುರಾಮ ರಘುರಾಮ|
ನಗುರಾಮ ನಗರಾಮ ಜಗರಾಮ ರಾಮ|
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ರಾಮ ರಾಮ ರಾಮ ರಾಮ|
About – Innastu Bekenna Hrudayakke Rama
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಇದು ಶ್ರೀ ಗಜಾನನ ಶರ್ಮಾ ಬರೆದು ಸಂಯೋಜಿಸಿರುವ ಕನ್ನಡ ಭಕ್ತಿಗೀತೆ.
ಭಗವಾನ್ ರಾಮನನ್ನು ಹಿಂದೂಗಳಲ್ಲಿ ಯಾವಾಗಲೂ ಆದರ್ಶ ಮನುಷ್ಯ ಮತ್ತು ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಪೂಜಿಸುವ ದೇವತೆಗಳಲ್ಲಿ ಒಬ್ಬನೆಂದು ಪರಿಗಣಿಸಲಾಗುತ್ತದೆ. ಭಗವಾನ್ ರಾಮನು, ವಿಷ್ಣುವಿನ ದಶವತಾರದಲ್ಲಿ ವಿಷ್ಣುವಿನ ಏಳನೇ ಅವತಾರ. ರಾಮನು ಅಯೋಧ್ಯೆಯಲ್ಲಿ ರಾಜ ದಶರಥ ಮತ್ತು ಕೌಶಲ್ಯ ದಂಪತಿಯ ಹಿರಿಯ ಮಗನಾಗಿ ಜನಿಸಿದನು. ರಾಮನು ಸೀತಾ ದೇವಿಯನ್ನು ಮದುವೆಯಾದನು. ಲಾವಾ ಮತ್ತು ಕುಶಾ ರಾಮ ಮತ್ತು ಸೀತಾ ದೇವಿಯವರ ಪುತ್ರರು. ಲಕ್ಷ್ಮಣ, ಭರತ, ಮತ್ತು ಶತ್ರುಘ್ನನು ಭಗವಾನ್ ರಾಮನ ಒಡಹುಟ್ಟಿದವರು.
ಸರ್ ಎಂತಹ ಅತ್ಯುತ್ತಮ ಸಾಹಿತ್ಯ ಸರ ಈ ಕಾವ್ಯ ಸಾಹಿತ್ಯ ಓದುವುದೆ ಅಥವಾ ಹಾಡನ್ನು ಕೇಳುವುದೆ ಆಗಲಿ ಮಾಡಿದರೆ ನಮ್ಮ ಮನಸ್ಸು ತನ್ನ ಚಂಚಲ ಸ್ವಭಾವವನ್ನು ಬಿಟ್ಟು ಸ್ಥಬ್ದವಾಗಿ ಎಕ ಮುಖ,ಎಕ ಚಿತ್ತ,ಎಕ ಭಾವದಲ್ಲಿ ಆ ಕೌಸಲ್ಯ ಸುತ,ರಘುಕುಲ ತಿಲಕ,ದಶರಥ ನಂದನ,ಇಕ್ಷಾಕ್ಷು ವಂಶಿ,ಸೀತಾಪತಿ,ಆ ಶ್ರೀ ರಾಮಚಂದ್ರನ ಭಾವದಲ್ಲಿ ಮನ ತಲ್ಲಿನ ವಾಗಿ ನಾನು ಯಾರೆಂಬುದು ನನಗೆ ತಿಳಿಯದ ಹಾಗೆ ಶ್ರೀ ರಾಮರ ಭಾವದಲ್ಲಿ ನನ್ನ ಮನ,ಬುದ್ದಿ,ದೇಹ ನನ್ನಸರ್ವಸ್ವ ಶ್ರೀ ರಾಮರಲ್ಲಿ ಎಕವಾಗಿ ಹೋಗಿದೆ.ಇಂತಹ ಕಾವ್ಯ ಸಾಹಿತ್ಯ ರಚಿಸಿದ ಗಜಾನನ ಶರ್ಮಾ ಅವರೆ ನಿಮಗೆ ಅನಂತ ಕೋಟಿ ಕೋಟಿ ಧನ್ಯವಾದಗಳು. ನಿವು ಇನ್ನಷ್ಟು ಇಂತಹ ಸಾಹಿತ್ಯ ರಚನೆಮಾಡಬೇಕು.ಎಂದು ನನ್ನ ಬಿನ್ನಹ ಜೈ ಶ್ರೀ ರಾಮ.ನಾನು ಈ ಸಂದೇಶ ರಚಿಸುವಾಗ ಎನಾದರು ಅಕ್ಷರ ದೋಷವಾದರೆ.ದಯಮಾಡಿ ಕ್ಷಮಿಸಿ ಯಾಕೆಂದರೆ ನಾನೂಬ್ಬ ಅನಕ್ಷರಸ್ತ ಕನ್ನಡಿಗ.ಜೈ ಶ್ರೀರಾಮ
Yes very beautiful composition by sir. It shows the entire life history of lord Ram & all the people he was connected. The lyrics depict the devotion each one had for him & desiring to be one of them to be closer to lord Ram. Such a beautiful phrase saying that , “ I cannot ask you not to give me troubles.. but give me the strength to face them just like how you faced everything sturdily “.. everytime I hear this my eyes are filled with tears. Lord Ram himself has made this composition through you sir 🙏🙏
ಏನೇ ಕಷ್ಟ ಇರಲಿ, ಈ ಮಧುರವಾದ ಗಾಯನ ಕೇಳಿದ ಮೇಲೆ ಕಷ್ಟಗಳ ಭಾರವು ಕಡಿಮೆಯಾಗುತ್ತಿದೆ ಎಂದೆನಿಸುತ್ತದೆ ಜೊತೆಗೆ ನಮ್ಮನ್ನು ನಾವು ಮರೆಯುತ್ತೇವೆ. ಹೇಳುವುದಕ್ಕೆ ಪದಗಳು ಸಾಲುವುದಿಲ್ಲ…ತುಂಬು ಹೃದಯ ಧನ್ಯವಾದಗಳು ಗುರುಗಳೇ.